ಪರಿಚಯ
ಬಿ.ಎಂ.ಶ್ರೀ. ಪ್ರತಿಷ್ಠಾನಕ್ಕೆ ನಿಮಗೆ ಸುಸ್ವಾಗತ
“ದೇಶದಲ್ಲಿ ಹುಳು ತಿಂದುಹೋಗದೆ ಇರುವ ಗ್ರಂಥಗಳನ್ನೆಲ್ಲ ಶೇಖರಿಸಿ ಒಂದನ್ನೂ ಬಿಡದಂತೆ ಅಚ್ಚುಹಾಕುವುದು. ಅಚ್ಚಾದ ಮೇಲೆ ಎಲ್ಲವನ್ನೂ ಕೊನೆಮುಟ್ಟಿ ಶೋಧಿಸಿ ಹೊಸದಾಗಿ ಲಕ್ಷಣ ಗ್ರಂಥಗಳನ್ನು ಕಾಲಕ್ಕೆ ತಕ್ಕಂತೆ ರಚಿಸುವುದು.” ಇದು ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು 1911ರಲ್ಲೇ ನುಡಿದ ವಾಣಿ. ಇದನ್ನೇ ಧ್ಯೇಯವಾಗಿಸಿಕೊಂಡು ಇದರ ಜೊತೆಗೆ ಸಂಶೋಧನ ಕ್ಷೇತ್ರಗಳಲ್ಲಿ ಅಳಿಸಿಹೋಗುತ್ತಿರುವ ಇತರ ಪೂರಕ ಸಂಶೋಧಕ ಪ್ರವೃತ್ತಿಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಆಚಾರ್ಯರ ಹೆಸರಿನಲ್ಲಿ, ಈ ಸಂಸ್ಥೆಯನ್ನು 1979 ರಲ್ಲಿ ಪ್ರೊ. ಎಂ.ವಿ. ಸೀತಾರಾಮಯ್ಯನವರು ಸ್ಥಾಪಿಸಿದ್ದು ರಾಷ್ಟ್ರಕವಿ ಕುವೆಂಪುರವರಿಂದ ಉದ್ಘಾಟನೆಯಾಗಿದೆ. ಯಶಸ್ವೀ 34 ವರ್ಷಗಳನ್ನು ಪೂರೈಸಿ 2004ರಲ್ಲಿ ರಜತೋತ್ಸವವನ್ನು ಆಚರಿಸಿದೆ.
ಸ್ಥಾಪನೆ : ಮೇ 6, 1979
ಸಂಸ್ಥಾಪಕರು : ಪ್ರೊ. ಎಂ.ವಿ. ಸೀತಾರಾಮಯ್ಯ
ಉದ್ಘಾಟಕರು : ರಾಷ್ಟ್ರಕವಿ ಕುವೆಂಪು, 10-3-1988
ಸಂಸ್ಥಾಪಕ ಕಾರ್ಯದರ್ಶಿ : ಪ್ರೊ. ಎಂ.ವಿ. ಸೀತಾರಾಮಯ್ಯ, 6-5-1979 ರಿಂದ 8-10-1989
ಪೋಷಕರು : ಮಾಸ್ತಿ ವೆಂಕಟೇಶ ಅಯ್ಯಂಗಾರ್
ಭವನದ ಶಂಕುಸ್ಥಾಪನೆ : 24-10-1997
ಬಿ.ಎಂ.ಶ್ರೀ. ಕಲಾಭವನದ ಲೋಕಾರ್ಪಣೆ ರಜತಮಹೋತ್ಸವ 11-9-2004
ಪ್ರೋ. || ಎಂ.ವಿ. ಸೀತಾರಾಮಯ್ಯ
ಸಂಸ್ಥಾಪಕರಾದ ದಿವಂಗತ ಪ್ರೋ|| ಎಂ.ವಿ. ಸೀತಾರಾಮಯ್ಯನವರು ತಮ್ಮ ತನು ಮನ ಧನವನ್ನು ಸಮರ್ಪಿಸಿ ಪ್ರತಿಷ್ಠಾನವನ್ನು ಕಟ್ಟಿ ಬೆಳೆಸಿ ನಾಡಿನಲ್ಲೆ ಒಂದು ಪ್ರತಿಷ್ಠಿತ ಸಂಸ್ಥೆಯನ್ನಾಗಿ ಮಾಡಿದ್ದಾರೆ. ಅವರ ಸಾಧನೆಯ ಫಲವಾಗಿ ಬೆಂಗಳೂರಿನಲ್ಲಿ “ಬಿ.ಎಂ.ಶ್ರೀ. ಕಲಾಭವನ”, ತುಮಕೂರು ಜಿಲ್ಲೆಯ ಸಂಪಿಗೆ’ಯಲ್ಲಿ “ಬಿ.ಎಂ.ಶ್ರೀ. ಭವನ” ನಿರ್ಮಾಣಗೊಂಡು ಕಾರ್ಯನಿರತವಾಗಿವೆ. ಈ ಸಂಸ್ಥೆಯ ಬೆಳವಣಿಗೆಗೆ ಅನೇಕ ಹಿರಿಯರು ಕಾರಣರಾಗಿದ್ದಾರೆ.
ಆಚಾರ್ಯ ಬಿ. ಎಂ. ಶ್ರೀಕಂಠಯ್ಯ
“ಕನ್ನಡದ ಕಣ್ವ” ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಹೊಸಗನ್ನಡದ ಯುಗಪುರುಷರು; ಇಂದು ಹೊಸಗನ್ನಡದ ಸಾಹಿತ್ಯ ಎಂದು ಯಾವುದನ್ನು ಕರೆಯುತ್ತೇವೆಯೋ ಅದೆಲ್ಲಕ್ಕೂ ಪ್ರೇರಕ ಶಕ್ತಿ. ಇಂದಿನ ಎಲ್ಲ ಹೆಸರಾಂತ ಸಾಹಿತಿಗಳೂ ಇವರ ಶಿಷ್ಯ – ಪ್ರಶಿಷ್ಯರೇ. ಇಂತಹ ಆಚಾರ್ಯ ಪುರಷರ ಹೆಸರಿನ ಈ ಸಂಸ್ಥೆ ಸೃಜನ ಮತ್ತು ಸಂಶೋಧನ ಎರಡೂ ಸಾಹಿತ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿದೆ. ಒಂದು ಪ್ರಾಚೀನ ಸಾಹಿತ್ಯ ಪರಿಷ್ಕರಣ. ಇನ್ನೊಂದು ಆಧುನಿಕ ಸಾಹಿತ್ಯದ ಪುರಸ್ಕರಣ.
ಪರಿಚಯ
ಸಂಸ್ಥೆ-ಸಾಧನೆ-ಸೌಲಭ್ಯಗಳು
ಸಂಸ್ಥೆಯ ಸಾಧನೆ
ಈಗಾಗಲೇ ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಕರ್ನಾಟಕದಲ್ಲಿ ಸಂಶೋಧನೆ ಮತ್ತು ಪಾಂಡಿತ್ಯ ಸಂವರ್ಧನೆಗಳಿಗೆ ವೀಸಲಾದ ಪ್ರತಿಷ್ಠತ ಸಂಶೋಧನ ಕೇಂದ್ರವಾಗಿದೆ. ಈವರೆಗೆ ಸುಮಾರು 75 ಪ್ರಕಟಣೆಗಳನ್ನು ಹೊರತಂದಿದೆ. ಸಂಶೋಧನ ಕಾರ್ಯಕ್ಕೆ ಅನುಕೂಲವಾಗುವಂತೆ ಹದಿನೈದು ಸಾವಿರಕ್ಕೂ ಅಧಿಕ ಅಮೂಲ್ಯ ಗ್ರಂಥಗಳ ಆಕರ ಗ್ರಂಥಾಲಯವನ್ನೂ ಸುಮಾರು ಮೂರು ಸಾವಿರಕ್ಕೂ ಅಧಿಕ ಪ್ರಾಚೀನ ಓಲೆಗರಿ, ಕಾಗದದ ಹಸ್ತಪ್ರತಿಗಳ ಭಂಡಾರವನ್ನೂ ಹೊಂದಿರುವ ಪ್ರತಿಷ್ಠಾನ ಸದಸ್ಯರು, ಉದಾರ ದಾನಿಗಳು ಮತ್ತು ಅಭಿಮಾನಿಗಳಿಂದಲೇ ಬೆಳೆಯುತ್ತಿದೆ.
ನಿಯತಕಾಲಿಕೆಗಳು/ಪ್ರಕಟಣೆಗಳು
ಕನ್ನಡದಲ್ಲಿರುವ ಕೆಲವೇ ಸಂಶೋಧನಾತ್ಮಕ ನಿಯತಕಾಲಿಕೆಗಳಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುವ “ಕರ್ನಾಟಕ ಲೋಚನ” ಪತ್ರಿಕೆಯನ್ನು ಪ್ರತಿಷ್ಠಾನ 1982ರಲ್ಲಿ ಆರಂಭಿಸಿತು. ಸಂಶೋಧನ ಕ್ಷೇತ್ರದ ವಿವಿಧ ಶಾಖೆಗಳಲ್ಲಿ ನುರಿತ ವಿದ್ವಾಂಸರು ಬರೆಯುವ ಸಂಶೋಧನ ಲೇಖನಗಳು, ಟಿಪ್ಪಣಿಗಳು, ಸಂಶೋಧನ ಗ್ರಂಥಗಳ ವಿಮರ್ಶೆ, ಟೀಕೆ-ಟಿಪ್ಪಣಿ ಇತ್ಯಾದಿ ಇದರಲ್ಲಿರುತ್ತವೆ. ನಿಯತವಾಗಿ ಪ್ರಕಟವಾಗುತ್ತಿರುವ ನಾಡಿನ ಏಕೈಕ ವಿದ್ವತ್ ಪತ್ರಿಕೆ ಎಂಬ ಹೆಗ್ಗಳಿಕೆ ಇದಕ್ಕಿದೆ. ವಾರ್ಷಿಕ ಚಂದಾ : ವ್ಯಕ್ತಿಗಳಿಗೆ ರೂ. 40/- ಅಜೀವ ರೂ. 400/-, ಸಂಸ್ಥೆ ಗ್ರಂಥಾಲಯಗಳಿಗೆ ವಾರ್ಷಿಕ 100-00. ಪ್ರತಿಷ್ಠಾನದ ಸದಸ್ಯರಿಗೆ ಉಚಿತ.
ಬಿ.ಎಂ.ಶ್ರೀ. ಕಲಾಭವನ
150 ರಿಂದ 200 ಜನರಿಗೆ ಸ್ಥಳಾವಕಾಶ, ಧ್ವನಿ – ಬೆಳಕಿನ ಸೌಲಭ್ಯ ಇರುವ ಈ ಸಭಾ ಭವನ ಸಾಹಿತ್ಯ – ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲಕರವಾಗಿದೆ. ಉಪನ್ಯಾಸ, ವಿಚಾರಗೋಷ್ಠಿ, ಸ್ತಕ ಬಿಡುಗಡೆ, ಕವಿಗೋಷ್ಠಿ, ಸಭೆ, ಸಂವಾದ, ಸಂಗೀತ, ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಂಕೇತಿಕ ಸೇವಾ ಶುಲ್ಕದ ಮೇರೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಗೆ ನೀಡಲಾಗುವುದು.
ಎಂ.ವಿ.ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರ
ರಾಷ್ಟ್ರೀಯ ಹಸ್ತಪ್ರತಿ ಮಿಷನ್ನ ಮಾನ್ಯತೆಯ ಕೇಂದ್ರ
ರಾಷ್ಟ್ರೀಯ ಹಸ್ತಪ್ರತಿ ಮಿಷನ್ನಿಂದ ಮಾನ್ಯತೆ ಪಡೆದಿರುವ ಪ್ರತಿಷ್ಠಾನ ರಾಷ್ಟ್ರದ ಪ್ರತಿಷ್ಠಿತ ಹಸ್ತಪ್ರತಿ ಅಧ್ಯಯನ ಕೇಂದ್ರವಾಗಿದ್ದು ಅಮೂಲ್ಯ ಓಲೆಗರಿ ಗ್ರಂಥಗಳು, ಕಾಗದ ಪತ್ರಗಳು, ನಮ್ಮ ತಲೆಮಾರಿನ ಸಾಹಿತಿ-ಗಣ್ಯರ ಪತ್ರಗಳು ಮತ್ತು ಹಸ್ತಪ್ರತಿಗಳನ್ನು ಸಂರಕ್ಷಿಸುತ್ತ ನಾಡಿನ ಆಸ್ತಿಯನ್ನು ಉಳಿಸಲು ಶ್ರಮಿಸುತ್ತಿರುವ ಸೇವಾಸಂಸ್ಥೆಯಾಗಿದೆ.
ಬಿ.ಎಂ.ಶ್ರೀ. ಪ್ರತಿಷ್ಠಾನಕ್ಕೆ ನೀವೂ ಈ ರೀತಿಯಾಗಿ ಸಹಾಯ ಮಾಡಬಹುದು
- ಸದಸ್ಯರಾಗುವುದರ ಮೂಲಕ
- ದತ್ತಿನಿಧಿಗಳನ್ನು ಸ್ಥಾಪಿಸುವ ಮೂಲಕ
- ಪ್ರತಿಷ್ಠಾನದ ಚಟುವಟಿಕೆಗಳಿಗೆ ಧನಸಹಾಯದ ಮೂಲಕ. ದಾನಿಗಳಿಗೆ ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಸೆಕ್ಷನ್ 8೦ ಜಿ ಸೌಲಭ್ಯ ಲಭ್ಯವಾಗುತ್ತದೆ.
- ಕಚೇರಿ-ಗ್ರಂಥಾಲಯಗಳಿಗೆ ಬೇಕಾಗುವ ಪೀಠೋಪಕರಣಗಳ ಹಾಗೂ ಉಪಕರಣಗಳನ್ನು ದಾನ ರೂಪದಲ್ಲಿ ನೀಡು ಮೂಲಕ.
- ಆಸ್ತಕ – ಹಸ್ತಪ್ರತಿ – ಪತ್ರಗಳ ದಾನದ ಮೂಲಕ : ಹಸ್ತಪ್ರತಿಗಳು ನಿಮ್ಮಲ್ಲಿದ್ದರೆ, ಹಾಳುಮಾಡದೆ, ನಿರ್ಲಕ್ಷಿಸದೆ ದಾನವಾಗಿ ನೀಡಬಹುದು. ಮೌಲಿಕ ಸ್ತಕಗಳನ್ನೂ ಸಾಹಿತಿ – ಗಣ್ಯರ ಪತ್ರ – ಹಸ್ತ ಪ್ರತಿಗಳನ್ನು ಪ್ರತಿಷ್ಠಾನಕ್ಕೆ ದಾನಮಾಡಬಹುದು.
- ಪುಸ್ತಕಗಳನ್ನು ಕೊಳ್ಳುವ ಮೂಲಕ : ಪ್ರತಿಷ್ಠಾನದ ಪ್ರಕಟನೆಗಳು ಕನ್ನಡ ಸಾಹಿತ್ಯ ಸಂಸ್ಕೃತಿಯ ಅಧ್ಯಯನದ ಮೌಲಿಕ ಗ್ರಂಥಗಳಾಗಿದ್ದು ಅವುಗಳನ್ನು ಸ್ವಂತಕ್ಕೆ, ಸ್ನೇಹಿತರಿಗೆ, ಸಂಘ – ಸಂಸ್ಥೆ, ಗ್ರಂಥಾಲಯಗಳಿಗೆ ಕೊಳ್ಳುವ ಮೂಲಕ ಸಹಕರಿಸಬಹುದು.
Contact
ಸಂಪರ್ಕಿಸಿ
ಪ್ರತಿಷ್ಠಾನದ ವಿಳಾಸ:
ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ(ರಿ.)
ಎಂ.ವಿ.ಸೀ. ಸಂಶೋಧನ ಕೇಂದ್ರ
(ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿದೆ)
ಬಿ.ಎಂ.ಶ್ರೀ. ಕಲಾ ಭವನ
3ನೇ ಮುಖ್ಯರಸ್ತೆ, ನರಸಿಂಹರಾಜಾ ಕಾಲೋನಿ
ಬೆಂಗಳೂರು – 560 019
ದೂರವಾಣಿ: 080- 26615877, 26676773
ವಿ-ಅಂಚೆ: [email protected]
ಅಂತರಜಾಲ ತಾಣ: www.bmshri.org
ಇ-ಮೇಲ್
ದೂರವಾಣಿ
ವಿಳಾಸ
ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ(ರಿ.)
3ನೇ ಮುಖ್ಯರಸ್ತೆ, ನರಸಿಂಹರಾಜಾ ಕಾಲೋನಿ, ಬೆಂಗಳೂರು – 560019
ಸಂದೇಶ ಕಳುಹಿಸಿ
ಬಿ. ಎಂ. ಶ್ರೀ ಪ್ರತಿಷ್ಠಾನದ ಜೊತೆ ಸಂವಹನ ನೆಡೆಸಲು ನಮಗೆ ಸಂದೇಶ ಕಳುಹಿಸಿ. ನಮ್ಮ ಇಮೇಲ್ ಹಾಗೂ ದೂರವಾಣಿಯ ಮೂಲಕವೂ ನಮ್ಮನ್ನು ತಲುಪಬಹುದು.

